Nammuru..... Nammajana

ನಮ್ಮೂರು..... ನಮ್ಮ ಜನ....

Sunday, September 4, 2011

ಕ್ಯಾಮೆರಾ ಕಣ್ಣಲ್ಲಿ ಪರಿಸರ ಕಾಳಜಿ


 

11TPR_07
ವೃತ್ತಿಯ ಕಣ್ಣಿಗೆ ಪ್ರವೃತ್ತಿಯ ಕ್ಯಾಮೆರಾ ಹಿಡಿದಾಗ ಲಾಭದ ಉದ್ದೇಶ ಮೀರಿ ಸಮಾಜ ಸಾರ್ಥಕತೆಯ ಒಳನೋಟ ಕಾಣಿಸುತ್ತದೆ ಎಂಬುದನ್ನು ಇಲ್ಲಿನ ಛಾಯಾಚಿತ್ರ ಸಂಘದವರು ಮಾಡಿ ತೋರಿಸಿದ್ದಾರೆ.
ಹಸಿರು ತಿಪಟೂರು ವೇದಿಕೆಯಿಂದ ಈಚೆಗೆ ನಡೆದ ಪರಿಸರ ಆಂದೋಲನದಲ್ಲಿ ಪಾಲ್ಗೊಂಡಿದ್ದ ತಾಲ್ಲೂಕು ಛಾಯಾಚಿತ್ರಕಾರರ ಸಂಘದವರು ವೃತ್ತಿಗೆ ಸಂಬಂಧಿಸಿ ಪರಿಸರಪರ ಕಾಣಿಕೆ ನೀಡಬಹುದೇ ಎಂದು ಯೋಚಿಸಿದ್ದರು. ಅದರ ಫಲವಾಗಿ ಪರಿಸರಕ್ಕೆ ಸಂಬಂಧಿಸಿದ ಛಾಯಾಚಿತ್ರಗಳ ಸ್ಪರ್ಧೆ ಏರ್ಪಡಿಸಿ ವೃತ್ತಿನಿರತರಷ್ಟೇ ಅಲ್ಲದೆ ಸಾರ್ವಜನಿಕರಿಂದಲೂ ಫೋಟೋ ಆಹ್ವಾನಿಸಿದ್ದರು. ಈ ಸ್ಪರ್ಧೆಗೆ ಬಂದಿದ್ದ ಕೆಲ ಫೋಟೋಗಳು ಇಂಥ ನಗರದಲ್ಲೂ ಕ್ಯಾಮೆರಾ ಕಣ್ಣಿನ ವಿಸ್ತಾರ ಅವಕಾಶಗಳನ್ನು ತೆರೆದಿಟ್ಟವು.
ಕೆಲ ವೃತ್ತಿನಿರತರು ವಿಶಿಷ್ಟ ಫೋಟೋ ಪ್ರದರ್ಶಿಸಿ ಮೆಚ್ಚುಗೆಯನ್ನಷ್ಟೇ ಅಲ್ಲದೆ, ಬಹುಮಾನವನ್ನೂ ಪಡೆದರು. ವೃತ್ತಿಯ ಕ್ಯಾಮೆರಾ ಕಣ್ಣಿನ ಜತೆ ಮತ್ತೊಂದು ಕಣ್ಣು ತೆರೆದಿಟ್ಟರೆ ಕ್ಯಾಮೆರಾಮನ್‌ಗಳು 
11TPR_08
ಒಂದು ಚಿತ್ರದಲ್ಲೇ ಸಾವಿರ ಪದಗಳ ಶಕ್ತಿಯನ್ನು ತುಂಬಬಲ್ಲರು ಎಂಬುದಕ್ಕೆ ಪ್ರದರ್ಶನಗೊಂಡ ಫೋಟೋಗಳು ಸಾಕ್ಷಿಯಾಗಿದ್ದವು. ಅಷ್ಟೇ ಅಲ್ಲದೆ ಆ ಫೋಟೋಗಳಿಗೆ ಸಂಘದವರೇ ವಿಶಿಷ್ಟ ಅಡಿಬರಹ ನೀಡಿ ಆಕರ್ಷಣೆ, ವ್ಯಂಗ್ಯ, ವಿಡಂಭನೆ ಸೃಷ್ಟಿಸಿದ್ದರು.ಅವುಗಳಲ್ಲಿ ಮೊದಲ ಬಹುಮಾನ ಪಡೆದ ಬಸವೇಶ್ವರ ಸ್ಟುಡಿಯೋದ ರವೀಂದ್ರ ಅವರ ‘ಪುಕ್ಕಟ್ಟೆ ನೀರಿಗೆ ಕಾಸಿನ ಬರೆ ಅಡಿಬರಹದ ಫೋಟೋ ವ್ಯಂಗ್ಯೋಕ್ತಿಯಾಗಿತ್ತು. ಸಾರ್ವಜನಿಕ ನಲ್ಲಿಯಲ್ಲಿ ಸೋರಿ ಹೋಗುತ್ತಿರುವ ನೀರಿನ ಹಿನ್ನೆಲೆಯಲ್ಲಿ ಕಾಸಿಗೆ ನೀರು ಮಾರುವ ಟ್ಯಾಂಕರ್ ಸಾಗಿ ಹೋಗುತ್ತಿರುವುದು ನೀರಿನ ಮಿತ ಬಳಕೆಯ ಔಚಿತ್ಯವನ್ನು ಎತ್ತಿ ತೋರುತ್ತಿತ್ತು. ಎರಡನೇ ಬಹುಮಾನ ಪಡೆದ ನೊಣವಿನಕೆರೆ ವಿಷ್ಣು ಸ್ಟುಡಿಯೋದ ಲೋಕೇಶ್ ಅವರ ‘ಎಂದೂ ಮುಗಿಯದ ಪಯಣ ಅನ್ನದೇವರ ದೃಶ್ಯಕಾವ್ಯ ನಿರ್ಮಿಸಿತ್ತು. ಸುಂದರ್ ಸ್ಟುಡಿಯೋ ರಮೇಶ್ ಅವರ ‘ನಾಳೆಯ ಭವಿಷ್ಯ ಹೇಳುತ್ತಾರೆ ಶೀರ್ಷಿಕೆಯ ಫೋಟೋವಂತೂ ಪರಿಸರ ಮಾಲಿನ್ಯದ ಭವಿಷ್ಯವನ್ನು ನುಡಿಯುತ್ತಿತ್ತು.
ಸಿರಿಗಂಧ ಗುರು ಅವರು ಚಿಪ್ಪು ಸುಡುವ ಸ್ಥಳದ ಹೊಗೆ ದೃಶ್ಯದ ಫೋಟೋ ತೆಗೆದು ‘ನನ್ನನ್ನು ಹುಡುಕಿ ಎಂದು ಹೊಗೆಯಲ್ಲಿ ‘ತಿಪಟೂರು ಮೂಡಿಸಿದ್ದು ವಿಶೇಷ ಪ್ರಯತ್ನವಾಗಿತ್ತು. ತೆಂಗಿನ ಪುಡಿ ಕಾರ್ಖಾನೆಗಳ ತ್ಯಾಜ್ಯ ನಿಂತು ಮ್ಯಾಪ್ ಸೃಷ್ಟಿಯಾಗಿರುವ ಚಿತ್ರ ಮಲಿನದ ವಿಸ್ತಾರ ಬಿಂಬಿಸಿದೆ. ಇವಷ್ಟೇ ಅಲ್ಲದೆ ಕೆಲ ಫೋಟೋಗಳು ಭಾಷೆಗೆ ನಿಲುಕದ ಭಾವ ಬಿಚ್ಚಿಟ್ಟಿದ್ದವು.

"ಸೊಪ್ಪು ಸೆದೆ"



ತರಾವರಿ ಸೊಪ್ಪಿನ ನೋಟ; ಮುದ್ದೆ ಸಾರಿನೂಟ 
102ನಾಲ್ಕೈದು ತರಹದ ಸೊಪ್ಪಿನ ರುಚಿ ನೋಡಿ ತೃಪ್ತಿ ಕಂಡಿದ್ದ ನಗರ ಮತ್ತು ಗ್ರಾಮೀಣ ಜನರಿಗೆ ತಾಲೂಕಿನ ಕಲ್ಲಹಳ್ಳಿ ಬೆಟ್ಟದ ರಾಮೇಶ್ವರ ತಪ್ಪಲಲ್ಲಿ ಇತ್ತಿಚಿಗೆ  ನಡೆದ ಸೊಪ್ಪು ಸದೆ  ಕಾರ್ಯಕ್ರಮದಲ್ಲಿ  ಸುಮಾರು 50ಕ್ಕೂ ಹೆಚ್ಚು ಜಾತಿಯ ಸೊಪ್ಪಿನ ರುಚಿ ನೋಡಿ ನಿಬ್ಬೆರಗಾದ ಪ್ರಸಂಗ ನಡೆಯಿತು. 
ಕಲಬೆರಕೆ ಮತ್ತು ಕೀಟನಾಶಕ ಮಿಶ್ರಿತ ಆಹಾರದಿಂದ ಮಾಲಿನ್ಯಗೊಂಡಿರುವ ಮನಷ್ಯನ ಆರೋಗ್ಯಕ್ಕೆ ಸೊಪ್ಪಿನ ಬಳಕೆ ಒಂದಷ್ಟು ಶಕ್ತಿ ನೀಡ ಬಹುದು ಎಂದು ನಾನಾ ವೈಧ್ಯರು ಶಿಫಾರಸ್ಸು ಮಾಡುತ್ತಾರೆ. ನಾನಾ ರೋಗಗಳಿಗೆ ಹೆದರಿದ ನಗರ  ವಾಸಿಗಳು ಇತ್ತೀಚೆಗೆ ಸೊಪ್ಪನ್ನು ಬಳಸಲು ಆರಂಭಿಸಿದ್ದಾರೆ. ಮೆಂತ್ಯೆ ಸೊಪ್ಪು, ಅರಿವೆ ಮತ್ತು ದಂಟಿನ ಸೊಪ್ಪು, ಅನಗೋನೆ ಮತ್ತು ಸಬ್ಸಿಗೆ ಸೊಪ್ಪು,  ಇತ್ಯಾದಿ ಸುಮಾರು ೧೦ಕ್ಕೂ ಹೆಚ್ಚು ಜಾತಿಯ ಸೊಪ್ಪಿನ ಪರಿಚಯವಷ್ಟೆ ಇವರಿಗಿದೆ. ಆದರೆ ನಗರ ವಾಸಿಗಳ ಜೊತೆಗೆ ಗ್ರಾಮೀಣ ಪ್ರದೇಶದ ಜನರಿಗೂ ಪರಿಚಯವಿಲ್ಲದ ನೂರಾರು ಜಾತಿಯ ಯೋಗ್ಯ ಸೊಪ್ಪುಗಳು ನಮ್ಮ ನಡುವೆ ಇವೆ ಎನ್ನುವ ವಿಚಾರ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಾದ್ದು.
ಹೌದು, ಸೊಪ್ಪು-ಸದೆ ಅರಿವು ಮತ್ತು ರುಚಿ ಯೋಜನೆಯ ಮುರಳಿಯೊಂದಿಗೆ ಬೆಟ್ಟದ ರಾಮೇಶ್ವರ ಪ್ರೌಡಶಾಲೆಯ ಶಿಕ್ಷಕರು103 ಮತ್ತು ವಿದ್ಯಾರ್ಥಿಗಳು ಸೇರಿ ಸೊಪ್ಪು ಸದೆ ಎನ್ನುವ ಇಂತಹ ಅಪರೂಪದ ವಿಶೇಷ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಂಡಿದ್ದರು. ಶಾಸಕ ಬಿ.ಸಿ.ನಾಗೇಶ್, ಉಪವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ಎಎಸ್‌ಪಿ ಡಾ.ಬೋರಲಿಂಗಯ್ಯ, ತಹಸೀಲ್ದಾರ್ ವಿಜಯಕುಮಾರ್, ಸಿಡಿಪಿಒ ಎಸ್.ನಟರಾಜು, ಜನಾರ್ಧನ್, ಡಾ.ಮೈಥಿಲಿ, ಪಾರಂಪರಿಕ ವೈಧ್ಯ ಪರಮಶಿವಯ್ಯ, ಸಾವಯವ ಕೃಷಿಕ ಸಮಾಜದ ಅಧ್ಯಕ್ಷ ಪ್ರೊ.ನಂಜುಂಡಪ್ಪ, ಪರಿಸರ ಪ್ರೇಮಿ ಷಡಕ್ಷರ ದೇವರು, ಕೃಷಿಕ ಹರಿಂಜನ, ಮುಖ್ಯಶಿಕ್ಷಕ ಕೃಷ್ಣಗೌಡ, ಶಾಲೆಯ ಸಿಬ್ಬಂಧಿ ಜೊತೆಗೆ ಪತ್ರಕರ್ತರು ಹಾಗೂ ನಾನಾ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಹರ್ಷಪಟ್ಟರಲ್ಲದೇ ಜೀವಮಾನದಲ್ಲೇ ಕೇಳದ ನಾನಾ ಜಾತಿಯ ಸೊಪ್ಪು ಸದೆಯ ರುಚಿ ನೋಡಿ ಅತ್ಯಾನಂದ ಪಟ್ಟರು.
ಸುಮಾರು ೭೫ಕ್ಕೂ ಹೆಚ್ಚು ಮಕ್ಕಳು ಬಯಲು, ಹೊಲ, ಗದ್ದೆ, ಗುಡ್ಡ, ಬೇಲಿಯಲ್ಲಿ ಸಿಗುವ ನಾನಾ ಜಾತಿಯ ಸೊಪ್ಪನ್ನು ಕಿತ್ತುತಂದು ತಮ್ಮ ತಮ್ಮ 10ಮನೆಗಳಲ್ಲಿ ರುಚಿ ರುಚಿಯಾಗಿ ಸಾರು, ಪಲ್ಯ ಮಾಡಿಕೊಂಡು ಎಲ್ಲರಿಗೂ ಹೊಸ ರುಚಿ ತೋರಿಸಿದರು. ಉತ್ತರಾಣಿ ಸೊಪ್ಪು, ಕಾಡ ಸಬ್ಸಿಗೆ, ನಾಲ್ಕೆಲೆ
ಹೊನ್ನೆ, ಮುಳ್ಳುಸೀಗೆ ಸೊಪ್ಪು, ದಾಗಡಿಬಳ್ಳಿ, ವಾಯುನಾರಾಯಣಿ ಸೊಪ್ಪು, ಚುರುಕಿನ ಸೊಪ್ಪು, ಅರಸೀಕೆರೆ ಮುಳ್ಳಿನ ಸೊಪ್ಪು, ಒಂದೆಲಗ, ಗೊಡ್ಡರಿವೆ ಸೊಪ್ಪು, ಜಾಲಮೂಲಂಗಿ ಸೊಪ್ಪು, ನಾರಬಳ್ಳಿ, ಹಡಗು ಚಿಟ್ಟ, ಸೀಮೆ ಅನಗೋನೆ, ಅಕ್ಕಿ ಅವರೆ ಸೊಪ್ಪು, ಮಂಗರವಳ್ಳಿ ಸೊಪ್ಪು ಹೀಗೆ ನಮ್ಮ ಸುತ್ತಾಮುತ್ತ ಇರುವ ನೂರಾರು ಜಾತಿಯ ತರೆವಾರಿ ಸೊಪ್ಪಿನ ಸಾರು, ಪಲ್ಯವನ್ನು ಮಾಡಿ ತಂದಿದ್ದರು. ಅವುಗಳ ಒಂದೊಂದು ರುಚಿ ಸವಿಯುತ್ತಾ ಅಬ್ಬಾ ಎನ್ನುವಂತಿತ್ತು.ಮಕ್ಕಳು ಪ್ರದರ್ಶಿಸಿ, ವಿವರಿಸುತ್ತಾ ನೀಡಿದ ನಾನಾ ಜಾತಿಯ ಸೊಪ್ಪಿನ ಹೆಸರು ಕೇಳಿದ ಗಣ್ಯರು ಅಚ್ಚರಿ ಪಟ್ಟರಲ್ಲದೇ ನೂರಾರು ಸೊಪ್ಪಿನ ರುಚಿ ಸವಿದು ಬಾಯಿ ಚಪ್ಪರಿಸಿದರು.
ನಂತರ ಶಾಲೆಯಲ್ಲಿ ಏರ್ಪಡಿಸಿದ್ದ ವಿಶೇಷ ಔತಣ ಕೂಟದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಜಾತಿಯ ಸೊಪ್ಪಿನಿಂದ ಮಾಡಿದ ಸಾಂಬಾರು, ಮುದ್ದೆ, ನಾನಾ ಜಾತಿಯ ಹಸಿರು ಸೊಪ್ಪಿನ ಪಲ್ಯ, ಕೋಸಂಬರಿ ರುಚಿ ನೋಡಿದ ಗಣ್ಯರು ಉಂಡು ಬೀಗುತ್ತಾ ಏನೋ ಒಂದು ತರಹದ ಹೊಸ ಉಲ್ಲಾಸದಲ್ಲಿ ಕೃತಾರ್ಥರಾದೆವು ಎನ್ನುವಂತಿತ್ತು. ನಿಜಕ್ಕೂ ಇದು ಒಂದು ತೆರನಾದ ಹೊಸ ಅನುಭವ.104
ನಾನಾ ಔಷಧಿ ಸಸ್ಯಗಳ ಗಣಿ ಬೆಟ್ಟದ ರಾಮೇಶ್ವರ ಗುಡ್ಡ:
ತಾಲೂಕಿನ ಬೆಟ್ಟದ ರಾಮೇಶ್ವರ ಗುಡ್ಡ ಮಿನಿ ಕಲ್ಲೆತ್ತಗಿರಿ ಎನಿಸಿದೆ. ಕೇವಲ ೧೭.೫ ಎಕರೆ ಪ್ರದೇಶದಲ್ಲಿ ಹರಡಿರುವ ಸಣ್ಣ ಗುಡ್ಡ ಮಿನಿ ಸಂಜೀವಿನಿ ಗುಡ್ಡದಂತಿದೆ. ಇಲ್ಲಿ ಇರುವ ಸಣ್ಣ ಬಂಡೆಯ ಮೇಲೆ ಶ್ರೀರಾಮೇಶ್ವರ ದೇವಾಲಯ ಇದ್ದು ಇಡೀ ಪ್ರದೇಶ ಒಂದು ಧಾರ್ಮಿಕ ಕ್ಷೇತ್ರದಂತಿದೆ. ಆದರೆ ಗುಡ್ಡದ ಸುತ್ತಲೂ ನಾನಾ ಜಾತಿಯ ಮರಗಿಡಗಳ ನಡುವೆ ಔಷಧ ಸಸ್ಯಗಳು ರಾಶಿ ರಾಶಿ ತುಂಬಿದೆ. ಶತಾವರಿ, ಮಧುನಾಶಿನಿ, ಮಯೂರಿ ಶಕೆ, ವಿಷಮುಷ್ಟಿ, ನೆಲನುಗ್ಗೆ, ಮಂಡಗಳ್ಳಿ, ತಾಮ್ರಶಕೆ, ಮಯೂರಿ ಶಕೆ, ಕಾಡುಸಬ್ಸಿಗೆ, ಕಾಡು ಮಲ್ಲಿಗೆ, ಕಾಡು ಈರುಳ್ಳಿ, ಕಾಡು ಹೆಸರು, ಕಾಡು ಮೆಣಸು, ಕಾರೆ, ಸಹದೇವಿ, ಪಟಪಟೆ, ದಾಗಡಿ, ಉತ್ತರಾಣಿ, ಅಮೃತಬಳ್ಳಿ, ಈಶ್ವರಿ ಬಳ್ಳಿ, ನಾಗಬಲ, ಬಲ, ಮಹಾಬಲ ಇತ್ಯಾದಿ ನಾನಾ ಜಾತಿಯ ಔಷಧಿ ಸಸ್ಯಗಳ ಇಲ್ಲಿ ತುಂಬಿವೆ

Monday, January 31, 2011

Republic day celebration in Tiptur


Republic day celebration in Tiptur



Republic day celebration in Tiptur


Republic day celebration in Tiptur



Republic day celebration in Tiptur


Republic day celebration in Tiptur



Republic day celebration in Tiptur


Republic day celebration in Tiptur



Republic day celebration in Tiptur


Republic day celebration in Tiptur



Republic day celebration in Tiptur


Republic day celebration in Tiptur



Republic day celebration in Tiptur


Republic day celebration in Tiptur



Republic day celebration in Tiptur


Friday, December 31, 2010

Wish You All A Very Happy New Year - 2011


New Year Greeting, Tiptur

Tipturinfo. com
A global platform.....
ನಮ್ಮೂರನ್ನು ಜಾಗತಿಕ ವೇದಿಕೆಯಲ್ಲಿ ಹೆಮ್ಮೆಯಂದ ಕಾಣಿಸುವ ಹಾಗು ಬಾಳ ಪಯಣದ ಹಾದಿಯಲ್ಲಿ ಜಗತ್ತಿನಾದ್ಯಂತ ವಿಸ್ತರಿಸಿರುವ ನಮ್ಮೂರ ಮನಸುಗಳನ್ನು ಒಂದೆಡೆ ಸೇರಿಸುವ ನಮ್ಮ ಪ್ರಯತ್ನಕ್ಕೆ ಕೈ ಜೋಡಿಸುತ್ತಿರುವ ನಿಮಗೆಲ್ಲರಿಗೂ ತಿಪಟೂರು ಇನ್ ಫೋ ಡಾಟ್ ಕಾಂ ನ ಪರವಾಗಿ
ಹೊಸ ವರ್ಷದ ಶುಭಾಶಯಗಳು.

Tuesday, December 28, 2010

ಹ್ಯಾಪಿ ಕ್ರಿಸ್ಮಸ್.

Happy Christmas, Tiptur

Happy Christmas, Tiptur
Happy Christmas, Tiptur

Happy Christmas, Tiptur
Happy Christmas, Tiptur
Happy Christmas, Tiptur
Happy Christmas, Tiptur

Tuesday, December 14, 2010

ಕಾಡಾನೆ ದಿಕ್ಕು ತಪ್ಪಿ...

ಮದಗಜ ನರಹಂತಕನಾದ..
ಆರನೆ ಬಲಿಗೆ ಪ್ರಕೃತಿ ಪ್ರೇಮಿಯನ್ನೇ ಬಲಿ ತೆಗೆದುಕೂಂಡ..

ಕೂನೆಗೂ ಸೆರೆಸಿಕ್ಕಿತು ಪುಂಡಾನೆ.. ಗಂಡಾನೆಯ ಪುಂಡಾಟಕೆ ಆರನೇ ಬಲಿ..
ಬಲಿಯಾಗಿದ್ದು ವನ್ಯಜೀವಿ ಪ್ರೇಮಿ!
ane1


ತಿಪಟೂರಿನ ಸುತ್ತ ಮುತ್ತಲಿನ ಅರಣ್ಯ ಒಳಗೂಂಡ ಪುಟ್ಟ ಊರುಗಳಲ್ಲಿನ ಜನ ನಿದ್ದೆ ಮರೆತು ಜೀವ ಹಿಡಿದು ಕೂರುವಂತಾಗಿದೆ.ಕಾರಣ ಕಾಡು ತೂರೆದು ನಾಡಿಗೆ ಬರುತ್ತಿರುವ ಕಾಡು ಮೃಗಗಳು. ಮೊನ್ನೆಯಷ್ಟೇ ಹುಲ್ಲೆನಳ್ಳಿ ಕಾವಲಿನ ಕಿರಣ್ ಎಂಬುವ ಪುಟ್ಟ ಬಾಲಕನ್ನ ಬಲಿ ತೆಗೆದುಕೂಂಡ ಚಿರತೆ, ಅರಣ್ಯ ಇಲಾಖೆಯವರ ಸಾಹಸದಿಂದ ಸೆರೆಸಿಕ್ಕಿತ್ತು. ಈಗಲೂ ಸೂಗೂರು,ನೂಣವಿನಕೆರೆ ಸುತ್ತ ಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಘರ್ಜನೆ ಆಗಾಗ ಕೇಳಿ ಬರುತ್ತಿದೆ.ಕಿಬ್ಬನಹಳ್ಳಿಯಲ್ಲಿ ಕರಡಿಗಳು ಕಾಣುತ್ತಿವೆ.
yogees-house
The animals photos in Yogeesh home, tipturinfo.com
ಇನ್ನು ಈ ವಿಚಾರಗಳು ಮರೆತು ಮರೆಯಾಗುವ ಮೂದಲೆ ಮದಗಜನ ಸಾವಿನ ಗೀಳಿಡುವಿಕೆಯ ಕೂಂಡಿಗೆ ಆರನೇ ಬಲಿ ಬೆಸೆದುಕೂಂಡಿದೆ, ವಿಚಿತ್ರವೆಂದರೆ ಈ ಬಾರಿ ಬಲಿಯಾಗಿದ್ದು ನಿವೃತ್ತ ಅರಣ್ಯ ವಲೆಯಾಧಿಕಾರಿ ಮಗ ಹಾಗು ವನ್ಯಜೀವಿ ಪ್ರೇಮಿ ಯೋಗೀಶ್! ಗ್ಯಾರಘಟ್ಟ ಸಮೀಪದ ರಾಮೇನಹಳ್ಳಿ ಬಳಿ ತೋಟದ ಮನೆಯ ನಿವಾಸಿ ಯೋಗೀಶ್ ( 35) ವರ್ಷದ ಹಿಂದಷ್ಟೇ ವಿವಾಹವಾಗಿದ್ದ. ತಮ್ಮ ತೋಟದ ತಗ್ಗಿನಲ್ಲಿದ್ದ ಕೆರೆ ಬಳಿ ಹೋದಾಗ ಅಲ್ಲಿದ್ದ ಆನೆ ಹಿಗ್ಗಾಮುಗ್ಗಾ ತುಳಿದು ಅಪ್ಪಚ್ಚಿ ಮಾಡಿತ್ತು. ಇವರ ತಂದೆ ಮೂಲತಃ ಅರಸೀಕೆರೆ ತಾಲ್ಲೂಕು ಕಾಮಸಮುದ್ರ ಸಮೀಪದ ಕಸವನಹಳ್ಳಿ ಗ್ರಾಮದವರಾದ ಇವರು ರಾಮೇನಹಳ್ಳಿ ಬಳಿ ಜಮೀನು ಖರೀದಿಸಿ ಅಲ್ಲಿಯೇ ಮನೆ ಕಟ್ಟಿಕೊಂಡು ವಾಸವಿದ್ದರು. ಬಿಎಸ್ಸಿ ಓದಿದ್ದ ಏಕೈಕ ಪುತ್ರ ಯೋಗೀಶ್‌ಗೆ ಸೋದರಿ ಮಗಳನ್ನೇ ತಂದು ವರ್ಷದ ಹಿಂದೆ ಮದುವೆ ಮಾಡಿದ್ದರು. ಯೋಗೀಶ್ ಪತ್ನಿ ಚೈತ್ರ ತಿಪಟೂರಿನ ಕೆಐಟಿಯಲ್ಲಿ ೪ನೇ ಸೆಮಿಸ್ಟರ್‌ನಲ್ಲಿ ಎಂಜಿನಿಯರಿಂಗ್ ಓದು ಮುಂದುವರಿಸಿದ್ದರು. ಆನೆಯ ರೂಪದಲ್ಲಿ ಬಂದೆರಗಿದ ಆಘಾತ ಇಡೀ ಕುಟುಂಬವನ್ನು ದುಃಖದಲ್ಲಿ ಮುಳುಗಿಸಿದೆ.

ಶವದೂಂದಿಗೆ ಆಟವಾಡುತ್ತಿತ್ತು! ಮಾನವನ ಮೇಲೆ ಅದೆಷ್ಟು ಕೋಪವೂ ಉಹಿಸಲಾಗದು ಏಕೆಂದರೆ ಅದು ಯೋಗೀಶ್ ನನ್ನು ಕೂಂದಹಾಕಿರೂ ರೀತಿಯೇ ಅಂತಹದು ನೆಲಕ್ಕೆ ಅ‌ಪ್ಪಚ್ಚಿಯಾಗುವಂತೆ ತುಳಿದು ಮತ್ತೆ ಮತ್ತೆ ತುಳಿದಿದೆ ಎಂದು ನೋಡಿದರೆ ತಿಳಿಯುತಿತ್ತು.ಅದಲ್ಲದೆ ಸುಮಾರು ಎರೆಡು ಗಂಟೆಗಳ ಕಾಲ ಅಲ್ಲೇ ಇದ್ದು ಆಟವಾಡುತಿತ್ತು ಎಂದು ತಿಳಿಯಲಾಗಿದೆ.
ಅರಸೀಕೆರೆ ತಾಲ್ಲೂಕಿನಲ್ಲಿ ನಾಲ್ಕೈದು ತಿಂಗಳಿಂದ ಆತಂಕ ಸೃಷ್ಟಿಸಿ ಇಬ್ಬರನ್ನು ಬಲಿ ತೆಗೆದುಕೊಂಡು ಹಾವಳಿ ಇಟ್ಟಿದ್ದ ಈ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಆ ತಾಲ್ಲೂಕಿನ ಹುಣಸೇಗುಂಡಿ ಬಳಿ ಮೂರು ದಿನದ ಹಿಂದೆ ಸಕಲ ಸಿದ್ಧತೆಯೊಂದಿಗೆ ಕ್ಯಾಂಪ್ ಹಾಕಿದ್ದರು. ಆ ಮದಗಜವನ್ನು ಬಂಧಿಸಲು ಪಳಗಿದ ಆನೆಗಳೊಂದಿಗೆ ಪ್ರಯತ್ನಿಸಿದ್ದರು. ಬುಧವಾರ ಸಂಜೆ ತಿಪಟೂರು ತಾಲ್ಲೂಕಿನ ಗಡಿ ಪ್ರವೇಶಿಸಿದ್ದ ಒಂಟಿ ಸಲಗ ಗುರುವಾರ ಬೆಳಗ್ಗೆ ಗ್ಯಾರಘಟ್ಟ ಹೊಸಕೆರೆ ಬಳಿ ಕಾಣಿಸಿಕೊಂಡಿತ್ತು. ಅಲ್ಲಿಗೆ ಕ್ಯಾಂಪ್ ಸಿಬ್ಬಂದಿ ಬೆನ್ನಟ್ಟಿ ಬಂದು ಸೆರೆ ಹಿಡಿಯುವ ಕಾರ್ಯಾಚರಣೆಗೆ ಸಿದ್ಧರಾಗಿದ್ದರು. ಅಷ್ಟರಲ್ಲಿ ಆ ಸ್ಥಳದಿಂದಲೂ ಆನೆ ಕಾಲು ಕಿತ್ತಿತ್ತು. ನಂತರ ಕೆರೆಯ ಆ ದಡದಿಂದ ಕೂಗಿಕೊಂಡ ತೋಟದ ಮನೆಯವರು ಪೊದೆಯ ಸಂದಿಯಲ್ಲಿ ವ್ಯಕ್ತಿಯೊಬ್ಬರ ಶವ ಇರುವುದಾಗಿ ತಿಳಿಸಿದಾಗಲೇ ಯೋಗೀಶ್ ಬಲಿಯಾಗಿದ್ದು ತಿಳಿಯಿತು. ಬೆಳಗ್ಗೆ ೮ರ ಸಮಯದಲ್ಲೇ ಮೃತಪಟ್ಟಿರುವುದು ನಂತರ ದೃಢಪಟ್ಟಿತು.ಈ ದುರಂತದ ನಡುವೆಯೇ ಕ್ಯಾಂಪ್ ಸಿಬ್ಬಂದಿ ಪಳಗಿದ ಆನೆಗಳೊಂದಿಗೆ ಬೆನ್ನತ್ತಿ ಅಲ್ಲಿಗೆ ಸಮೀಪದ ತೋಟವೊಂದರಲ್ಲಿದ್ದ ಒಂಟಿ ಸಲಗಕ್ಕೆ ಮತ್ತು ಬರಿಸುವ ಮದ್ದನ್ನು ಬಂದೂಕು ಮೂಲಕ ಶೂಟ್ ಮಾಡಿದರು.

ಅಲ್ಲಿಂದ ಸುಮಾರು ಒಂದೂವರೆ ಕಿಮೀ ಓಡಿದ ಅದು ನೆಲಕ್ಕುರುಳಿತು. ಕ್ರಿಪ್ರ ಗತಿಯಲ್ಲಿ ಪೂರಕ ಪ್ರಕ್ರಿಯೆ ಮುಗಿಸಿ ಮೂರು ಆನೆಗಳ ಸಹಾಯದಿಂದ ಬಂಧಿಸಿ, ನಿತ್ರಾಣಗೊಳಿಸಿ ಕರೆದೊಯ್ಯಲಾಯಿತು. ಸೆರೆಸಿಕ್ಕ ಈ ಗಂಡಾನೆಯ ವಯಸ್ಸು೨೮-೩೦ ವರ್ಷ ಇರಬಹುದೆಂದು ಸ್ಥಳದಲ್ಲಿ ಅಧಿಕಾರಿಗಳು ಅಂದಾಜಿಸಿದರು.

yogeesh2
Yogeesh, tipturinfo.com
ತುಳಿತಕೆ ಸಿಕ್ಕವರು.. ಇದಕ್ಕೆ ಮೊದಲು ಈ ಆನೆ ಬಾಣಾವಾರ ಸಮೀಪದ ಬುಚ್ಚನಕೊಪ್ಪಲು ಗ್ರಾಮದ ಕೃಷಿ ಕಾರ್ಮಿಕರೊಬ್ಬರನ್ನು ಆ. ೮ರಂದು, ಅದೇ ತಾಲ್ಲೂಕಿನ ಕಣಕಟ್ಟೆ ಸಮೀಪದ ರಾಂಪುರರೈತರೊಬ್ಬರನ್ನು ನ. ೨೮ರಂದು ಕೊಂದು ಹಾಕಿತ್ತು. ಅರಸೀಕೆರೆ ತಾಲ್ಲೂಕಿನಲ್ಲಿ ಹಾವಳಿ ಇಡುವ ಮೊದಲು ಗುಬ್ಬಿ ತಾಲ್ಲೂಕಿನಲ್ಲಿ ಆ. ೨ರಂದು ಈ ಆನೆಯ ದಾಂದಲೆಗೆ ಒಬ್ಬ ಅಸು ನೀಗಿದ್ದ. ಇದಕ್ಕೂ ಮೊದಲು ಬನ್ನೇರುಘಟ್ಟ ಸಮೀಪ ಇಬ್ಬರು ಈ ಆನೆಗೆ ಬಲಿಯಾಗಿದ್ದರು.





ವೆಂಕಟ್ ಎಂಬುವ ಶಾರ್ಪ್ ಶೂಟರ್..
vekat
Sharp shooter venkatesh, tipturinfo.com
ಆನೆಗಳನ್ನು ಹಿಡಿಯಲು ಎಲ್ಲಾ ಬಲಗಳ ಜೊತೆ ಒಬ್ಬ ಉತ್ತಮ ಗುರಿಕಾರ ಮುಖ್ಯ. ಆಲೂರು ವಲಯದ 52 ವರ್ಷದ ಶೂಟರ್ ವೆಂಕಟೇಶ್ ಇದೂವರೆಗೂ 57 ಆನೆಗಳನ್ನು ಶೂಟ್ ಮಾಡಿ ಆನೆಗಳನ್ನು ಸೆರೆಹಿಡಿಯಲು ಶ್ರಮವಹಿಸಿದ್ದಾರೆ. ತಿಪಟೂರಿನ ಗ್ಯಾರಘಟ್ಟದಲ್ಲಿ ಹಿಡಿದ ಆನೆದ 58 ನೆಯದು. ತನ್ನ ಬಂದೂಕಿಗೆ ಅರವಳಿಕೆ ಚಚ್ಚು ಮದ್ದು ಇಟ್ಟು ಗುರಿ ಇಟ್ಟ ಎಂದರೆ ಅದು ತಪ್ಪುವುದಿಲ್ಲ. ಗ್ಯಾರಘಟ್ಟದಲ್ಲಿ ಗುರುವಾರ ತುಂಬಾ ಅಪಾಯದ ಸ್ಥಿತಿಯಲ್ಲಿಯೂ ಮದವೇರಿದ ಆನೆಗೆ ಗುರಿಯಿಟ್ಟು ಅದನ್ನು ನೆಲಕ್ಕೆ ಕೆಡುವುದರಲ್ಲಿ ವೆಂಕಟೇಶ್ ಯಶಸ್ವಿಯಾದರು. ಮತ್ತಷ್ಟು ಅಪಾಯವಾಗುವ ಸನ್ನಿವೇಶವನ್ನು ಅಂತ್ಯಗೊಳಿಸಿದರು.





ಪುಂಡಾನೆ ಹಿಡಿಯಲು ಗಂಡೆದೆಯ ಅಭಿಮನ್ಯು..
ಕಾಡು ಬಿಟ್ಟು ಅಲೆಯುತ್ತಾ ನಾಡಿನ ಜನರಿಗೆ ಉಪದ್ರವ ನೀಡುವ ಆನೆಗಳನ್ನು ಹಿಡಿಯಲು ಸಾಹಸ ಮಾಡುವ ಅಭಿಮನ್ಯುವಿಗೆ ಈಗ ೩೫ ವರ್ಷ. ಎಂತಹ ಮದಗಜಗಳಾದರೂ ನುಗ್ಗಿ ಹಿಡಿಯುವ ರಾಜ್ಯದ ಏಕೈಕ ಪಳಗಿದ ಆನೆ ಇದು. ಇದೂವರೆಗೂ ಸಾಕಷ್ಟು ಆನೆಗಳನ್ನು ಹಿಡಿದು ಇಲಾಖೆಗೆ ಒಪ್ಪಿಸಿರುವ ಅಭಿಮನ್ಯು ಮುಂದೆabimanyu೧೦ ವರ್ಷ ಕೆಲಸ ಮಾಡುವ ಸಾಮಾರ್ಥ್ಯ ಪಡೆದಿದೆ. ಚಿಕ್ಕ ಮರಿಯಿಂದಲೂ ಜೇನುಕುರುಬರು ತಂದು ಸಾಕಿರುವ ಅಭಿಮನ್ಯುವಿಗೆ ಇತರೆ ಆನೆಗಳ ಕಂಡರೆ ಆಗದು ಅದರಲ್ಲಿ ಮನಷ್ಯರ ಗುಣವಿಶೇಷವಿರುವುದರಿಂದ ಕಾರ್ಯಾಚರಣೆಗೆ ಹೇಳಿ ಮಾಡಿಸಿದ ಆನೆಯಾಗಿದೆ. ಅರಣ್ಯ ಇಲಾಖೆಯ ಮೆಚ್ಚಿನ ಅಭಿಮನ್ಯು ಬಿಟ್ಟರೆ ಈ ಸಾಹಸಕ್ಕೆ ಬೇರೆ ಯಾರೂ ಸಿದ್ಧರಿಲ್ಲ. ಇಲಾಖೆ ಯಾವ ಬೇರೆ ಯಾವುದೇ ಆನೆಯನ್ನು ಸಿದ್ಧಗೊಳಿಸಿಲ್ಲ. ಗುಂಪು ಬಿಟ್ಟ ಆನೆಗಳು, ಮದವೇರಿದ ಆನೆ, ಪಂಡಾನೆ, ಒಂಟಿಸಲಗ ಹೀಗೇ ನಾನಾ ತರಹದ ಆನೆಗಳು ಅರಣ್ಯ ಬಿಟ್ಟು ನಾಡಿನ ಕಡೆ ಬಂದು ಜನರಿಗೆ ತೊಂದರೆ ಕೊಡುತ್ತವೆ. ಇಂತಹ ಆನೆಗಳನ್ನು ಹಿಡಿಯಲು ಸರಿಯಾದ ಕಾರ್ಯಾಚರಣೆ ಸಿದ್ಧ ಮಾಡಬೇಕಾಗುತ್ತದೆ. ಆನೆ ಹಿಡಯುವುದು ಕಷ್ಟದ ಮತ್ತು ಅಪಾಯಕಾರಿ ಕೆಲಸ. ಇಲಾಖೆಯಲ್ಲಿ ಸಾಕಷ್ಟು ನ್ಯೂನ್ಯತೆಗಳಿವೆ. ಇರುವ ಸೌಲಭ್ಯ ಸಾಲುವುದಿಲ್ಲ. ಕೊಟ್ಟಿರುವ ವಾಹನ ಮತ್ತು ಸಿಬ್ಬಂಧಿ ಬಳಕೆಗೆ ಸಾಕಾಗುವುದಿಲ್ಲ. ಇರುವ ಸವಲತ್ತುಗಳಲ್ಲೇ ಇಂತಹ ಸಾಹಸ ಕಾರ್ಯ ಮಾಡಬೇಕಾಗುವ ಜವಬ್ಧಾರಿ ಇಲಾಖೆಯ ಅಧಿಕಾರಿಗಳ ಮೇಲಿದೆ. ಇಂತಹ ಸಾಹಸ ಕಾರ್ಯ ಮಾಡಿದ ಆನೆಗಳನ್ನಲಾಗಲಿ ಅಥವಾ ಸಿಬ್ಬಂಧಿಗಳನ್ನಾಗಲಿ ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು ಇಲಾಖೆಯ ಕರ್ತವ್ಯ.


Blog Archive